ಹುಕ್ಕೇರಿ: ತಾಲೂಕಿನ ಬಸ್ಸಾಪೂರ ಗ್ರಾಮದಿಂದ ದ್ವಿಚಕ್ರ ವಾಹನ ಮೇಲೆ ಸುಮಾರು 30 ಲೀಟರ ಕಳ್ಳ ಭಟ್ಟಿ ಸಾರಾಯಿಯನ್ನು ಮೋಟರ ಟ್ಯೂಬದಲ್ಲಿ ಸಾಗಿಸುವಾಗ ಕರಗುಪ್ಪಿ ಗ್ರಾಮದ ಹತ್ತಿರ ಅಬಕಾರಿ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಗೋಕಾಕ್ ತಾಲೂಕಿನ ನೆಲಗಂಟ್ಟಿ ಗ್ರಾಮದ ಬಸವರಾಜ್ ತಳವಾರ ಎಂಬುವನ್ನು ಬಂಧಿಸಿ ಆತನಿಂದ ಸುಮಾರು 28,000 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಉಪನಿರೀಕ್ಷಕ ತೋರಪ್ಪ ಗಾರಡೆ, ಅಬಕಾರಿ ಇಲಾಖೆ ಸಿಬ್ಬಂದಿಗಳಾದ ಬಸಪ್ಪ ಊರಬಿನಟ್ಟಿ, ಮಂಜುನಾಥ ನೇಸರಗಿ, ಬಸನಗೌಡ ಪಾಟೀಲ,ಕಾಡೇಶಿ ಗಡದ, ಶಶಿಕಾಂತ್ ಉರಬಿನಟ್ಟಿ, ರಾಜು ಅಂಬಾರಿ, ಭಾಗವಹಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವರದಿ:ಕಲ್ಲಪ್ಪ ಪಾಮನಾಯಿಕ್