ಬೆಳಗಾವಿ: ಪೃಥ್ವಿ ಫೌಂಡೇಷನ್ ಹಾಗೂ ವಿವಿಧ ಸಂಘಗಳ ಒಕ್ಕೂಟ ಧಾರಿಣಿ ವತಿಯಿಂದ ಕನ್ನಡ ಭವನದಲ್ಲಿ ಅಕ್ಕಮಹಾದೇವಿ ಜಯಂತಿ ಹಮ್ಮಿಕೊಳ್ಳಲಾಗಿತ್ತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಶ್ರೀಮತಿ ಅಕ್ಕಮಹಾದೇವಿ ತೆಗ್ಗಿ ಅವರನ್ನು ಪೃಥ್ವಿ ಫೌಂಡೇಷನ್ ವತಿಯಿಂದ ಅನುಪಮ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ವೇಳೆ, ಶ್ರೀ ಗುರುಸಿದ್ಧ ಮಹಾಸ್ವಾಮಿಗಳು, ಶ್ರೀಮತಿ ನೀಲಗಂಗಾ ಚರಂತಿಮಠ, ಶ್ರೀಮತಿ ಶೈಲಜಾ ಭಿ0ಗೆ, ಶ್ರೀಮತಿ ರತ್ನಪ್ರಭಾ ಬೆಲ್ಲದ, ಹೇಮಾವತಿ ಸೋನೋಳಿ, ಅನ್ನಪೂರ್ಣಾ ಹಿರೇಮಠ ಭುವನೇಶ್ವರಿ ಪೂಜೇರಿ ಉಪಸ್ಥಿತರಿದ್ದರು.