ಪ್ರಿನ್ಸಿಪಲ್
ಗುಮಾಸ್ತ
ಹುಕ್ಕೇರಿ ವರದಿ:
ಹುಕ್ಕೇರಿ: ಪಟ್ಟಣದ ಖಾಸಗಿ ಶಾಲೆಯ ಅಟೆಂಡರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವ ಪ್ರಕರಣ ವರದಿಯಾಗಿದ್ದು, ಈ ಸಂಬಂಧ ಶಾಲೆಯ ಅಧ್ಯಕ್ಷ ಸೇರಿದಂತೆ ಮೂವರ ವಿರುದ್ಧ ದೂರು ದಾಖಲಾಗಿದೆ.
ಹುಕ್ಕೇರಿ ಪಟ್ಟಣದ ಎಸ್ ಕೆ ಪಬ್ಲಿಕ್ ಶಾಲೆಯ ಅಧ್ಯಕ್ಷ ಚನ್ನಬಸಪ್ಪ (ಪಿಂಟು) ರವೀಂದ್ರ ಶೆಟ್ಟಿ, ಪ್ರಾಚಾರ್ಯ ರಾಘವೇಂದ್ರ ಕುಲಕರ್ಣಿ, ಗುಮಾಸ್ತ ಶಂಕರ ಅಲಗರಾವುತ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇದೇ ಮಾ. 6 ರಂದು ಶಾಲೆಯ ಆಡಳಿತ ಮಂಡಳಿ ಕೊಠಡಿಯಲ್ಲಿ ಆರೋಪಿ ನಂ. 1 ಅಧ್ಯಕ್ಷ ಪಿಂಟು ಶೆಟ್ಟಿ, ಪ್ರಾಚಾರ್ಯ ರಾಘವೇಂದ್ರ ಕುಲಕರ್ಣಿ, ಕ್ಲರ್ಕ್ ಶಂಕರ ಅಲಗರಾವುತ ಮೂವರು ಸೇರಿ ತಮ್ಮನ್ನು ಅವ್ಯಾಚ ಶಬ್ದಗಳಿಂದ ನಿಂದಿಸಿ, ದೈಹಿಕ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಶಾಲೆಯ ಅಟೆಂಡರ್ವಿ ವಿನಾಯಕ ಪಾಟೀಲ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕೆಲಸ ನಿರ್ವಹಿಸುತ್ತಿದ್ದ ವೇಳೆ ಏಕಾಏಕಿ ಅಧ್ಯಕ್ಷ, ಪ್ರಾಚಾರ್ಯ, ಕ್ಲರ್ಕ್ ದೈಹಿಕ ಹಲ್ಲೆ ನಡೆಸಿದ್ದರಿಂದ ತೀವ್ರ ಅಸ್ವಸ್ಥರಾದ ಅಟೆಂಡರ ವಿನಾಯಕ ಪಾಟೀಲ ಅವರನ್ನು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ವರದಿ:ಕಲ್ಲಪ್ಪ ಪಾಮನಾಯಿಕ