ಬೆಳಗಾವಿ: ಮಹಾಂತೇಶ ನಗರದ ವಚನ ಪಿತಾಮಹ ಡಾ. ಫ ಗು ಹಳಕಟ್ಟಿ ಭವನ ಲಿಂಗಾಯತ ಸಂಘಟನೆ ದಾಸಿಮಯ್ಯ ಅವರ ಕುರಿತು ಉಪನ್ಯಾಸ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನ ಉದ್ಘಾಟಿಸಿ, ಶರಣ ಮಲ್ಲಿಕಾರ್ಜುನ ಕೋಳಿ ಅವರು ಉಪನ್ಯಾಸ ನೀಡಿದರು. ವಚನಗಳು ವೈಜ್ಞಾನಿಕವಾಗಿ ಇರುತ್ತವೆ. ಮುಚ್ಚಿಟ್ಟ ಜ್ಞಾನ ಕೊಳ್ಳೆಯುತ್ತದೆ. ಬಿಚ್ಚಿಟ್ಟ ಜ್ಞಾನ ಹೊಳೆಯುತ್ತದೆ. ದೃಡ ಸಂಕಲ್ಪ ಇರಬೇಕು. ನಡೆ ನುಡಿ ಒಂದೇ ಇರಬೇಕು. ದುಗ್ಗೇಳೆ ದಾಸಿಮಯ್ಯ ಸತಿಪತಿ ಆದಶ೯ವಾಗಿದ್ದರು. ನಡೆ ನುಡಿ ಒಂದಾಗಿದ್ದವು. ತವನಿಧಿ ಎಂದರೆ ಅಕ್ಷಯಪಾತ್ರೆ, ದುಗ್ಗಳೆ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಿದ್ದಳು ಎಂದರು.
ಪ್ರಾರಂಭದಲ್ಲಿ ಮಹಾದೇವಿ ಅರಳಿ ಸಾಮೂಹಿಕ ಪ್ರಾಥ೯ನೆ ನಡಿಸಿಕೊಟ್ಟರು, ಸುರೇಶ ನರಗುಂದ, ಬಿ.ಪಿ.ಜೇವಣಿ,ಶ್ರೀದೇವಿ ನರಗುಂದ,ವಿ ಕೆ ಪಾಟೀಲ,ಆನಂದ ಕಕಿ೯,ಸುನೀಲ ಸಾಣಿಕೊಪ್ಪ,ಮಹಾದೇವಿ ಅರಳಿ, ಜಯಶ್ರೀ ಚಾವಲಗಿ, ಶಂಕರ ಗುಡಸ ಮುಂ ವಚನ ವಿಶ್ಲೇಷಣೆ ಮಾಡಿದರು,ಬಸವರಾಜ ಬಿಜ್ಜರಗಿ ದಾಸೋಹ ಸೇವೆಗೈದರು,ಸಂಗಮೇಶ ಅರಳಿ ನಿರೂಪಿಸಿದರು. ಈರಣ್ಣ ದೇಯಣ್ಣವರ ಅಧ್ಯಕ್ಷತೆ ವಹಿಸಿದ್ದರು.ನಿಜವಾದ ಅನುಭವ ಮಂಟಪ ಇದಾಗಿದೆ ಚಚೆ೯ಗೆ ಅವಕಾಶ ಉಂಟು ಎಂದು ಹೇಳಿದರು.ಉಪ್ಪಿನಬೇಟಗೇರಿ ಮಕ್ಕಳು ಮಲ್ಲಕಂಭ, ಹಗ್ಗದ ಜೋತೆ ಮಾಡಿತೋರಿಸಿದರು.
ಅನೀಲ ರಘಶೆಟ್ಟಿ, ಮಹದೇವ ಕೆ೦ಪಿಗೌಡರ, ಬಸವರಾಜ ಗುರನಗೌಡರ, ಶೇಖರ ವಾಲಿಇಟಗಿ, ವಿರೂಪಾಕ್ಷಿ ದೊಡಮನಿ, ಸದಾಶಿವ ದೇವರಮನಿ, ಮಹಾಂತೇಶ ಮೆಣಸಿನಕಾಯಿ, ಲಲಿತಾ ವಾಲಿ ಇಟಗಿ, ವಿದ್ಯಾ ಕಕಿ೯,ಶಾಂತಾ ಕ೦ಬಿ,ಸುನ೦ದಾ ಕೆ೦ಪಿಗೌಡರ, ಪ್ರಸಾದ ಹೀರೇಮಠ, ಸೋಮಶೇಖರ ಕತ್ತಿ, ಉಪಸ್ಥಿತರಿದ್ದರು.
ಸುರೇಶ ನರಗುಂದ ವಂದಿಸಿದರು.