Live Stream

[ytplayer id=’22727′]

| Latest Version 8.0.1 |

Local NewsState News

ಸಂವಿಧಾನ ಇಲ್ಲದ ದೇಶ ನೆರಳು ಇಲ್ಲದ ಮನುಷ್ಯ ಇದ್ದಂತೆ; ಎ.ಎಸ್.ಪದ್ಮನ್ನವರ

ಸಂವಿಧಾನ ಇಲ್ಲದ ದೇಶ ನೆರಳು ಇಲ್ಲದ ಮನುಷ್ಯ ಇದ್ದಂತೆ; ಎ.ಎಸ್.ಪದ್ಮನ್ನವರ

ಬೆಳಗಾವಿ: ಸಂವಿಧಾನ ಇಲ್ಲದ ದೇಶ ನೆರಳು ಇಲ್ಲದ ಮನುಷ್ಯ ಇದ್ದಂತೆ ಎಂದು ಸಮನ್ವಯಾಧಿಕಾರಿ ಎ.ಎಸ್. ಪದ್ಮನ್ನವರ ಹೇಳಿದರು. ಅವರು ಜಿಲ್ಲೆಯ ಹಿಡಕಲ್ ಡ್ಯಾಮಿನ ಸರ್ ಎಂ. ವಿಶ್ವೇಶ್ವರಯ್ಯ ಪ್ರೌಢಶಾಲೆಯ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಎಸ್ ಸಿ /ಎಸ್ ಟಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಜಿಲ್ಲಾ ಘಟಕ ಚಿಕ್ಕೋಡಿ ಹಾಗೂ ತಾಲೂಕ ಘಟಕ ಹುಕ್ಕೇರಿ ಇವುಗಳ ಸಯುಕ್ತ ಆಶ್ರಯದಲ್ಲಿ ಜರುಗಿದ ಡಾ. ಬಿಆರ್ ಅಂಬೇಡ್ಕರ್ ಅವರ 134ನೇ ಜಯಂತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರತಿ ಜನಾಂಗಕ್ಕೂ ಸಮಾನತೆಯ ಹಕ್ಕನ್ನು ನೀಡಿದ ಡಾ. ಬಿ.ಆರ್ ಅಂಬೇಡ್ಕರ ಅವರು ಮಹಾನ್ ನಾಯಕರು ಎಂದು ಹೇಳಿದರು.

ಸ್ವತಂತ್ರ ಪೂರ್ವದಲ್ಲಿ ಡಾ. ಬಿಆರ್ ಅಂಬೇಡ್ಕರ್ ಅವರು ಶೋಷಿತ ವರ್ಗದವರಿಗೆ ನ್ಯಾಯ ಕೊಡಿಸಲು ಚಳುವಳಿ ಮಾಡಿದ್ದರು. ಅವರಿಗೆ ಬಂದ ಅವಕಾಶ ಮತ್ತು ಕಠಿಣ ಪರಿಶ್ರಮದ ಫಲವಾಗಿ ದಿಟ್ಟತನದಿಂದ ಭಾರತ ದೇಶಕ್ಕೆ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದಾರೆ. ಸಂವಿಧಾನದ ಕುರಿತು ಮಕ್ಕಳಿಗೆ ಅರಿವು ಮೂಡಿಸಬೇಕೆಂದರು.

ಉಪನ್ಯಾಸಕರಾಗಿ ಆಗಮಿಸಿದ ನಿವೃತ್ತ ಶಿಕ್ಷಕ ಬಿ.ಎಸ್.ನಾಡಕರ್ಣಿ ಮಾತನಾಡಿ ಸರ್ವರಿಗೂ ಸಮಾನತೆಯ ಹಕ್ಕನ್ನು ನೀಡಲು ಸಂವಿಧಾನ ರಚಿಸಿದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ಇತಿಹಾಸವನ್ನು ಬದಲಿಸಿದ ಒಬ್ಬ ಮಹಾನ್ ಪುರುಷ ಇತಿಹಾಸದ ಮಹತ್ವವನ್ನು ತಿಳಿದು ಜಾಗೃತಿ ಮೂಡಿಸಬೇಕಾಗಿದೆ. ಮನು ಸಂಸ್ಕೃತಿಯಿಂದ ದೇಶಕ್ಕೆ ಗಂಡಾಂತರವಿದೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳು ಜನರಿಗೆ ಪ್ರೇರಣೆಯಾಗಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ, ನಿವೃತ್ತ ಶಿಕ್ಷಕ ಬಿ ಎಸ್. ಮಾನೆ , ಶಿಕ್ಷಣ ಸಂಯೋಜಕರಾದ ಪ್ರಾರ್ಥನಳ್ಳಿ, ಪ್ರಧಾನ ಗುರುಗಳ ಜಿಲ್ಲಾ ಅಧ್ಯಕ್ಷ ಎಸ ಎ .ಸರಿಕರ, ಕೆ ಆರ್ ಈ ಎಸ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಸವರಾಜು ಕಡಕಬಾವಿ, ಎಸ್ ಸಿ /ಎಸ್ ಟಿ ಹುಕ್ಕೇರಿ ತಾಲೂಕಾ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಎ.ಜಿ ಕಾಂಬಳೆ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಎಸ್ ಸಿ /ಎಸ್ ಟಿ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀ ಎಸ್.ಬಿ.ಶಿಂಗೆ, ಕಾಗವಾಡ ವಲಯ ಹಾಗೂ ಹುಕ್ಕೇರಿ ವಲಯದ ವಿವಿಧ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಯ ಶಿಕ್ಷಕರು ಶಿಕ್ಷಕಿಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಎಸ್ .ಸಿ/ ಎಸ್.ಟಿ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷರಾದ ರಾಜು ತಳವಾರ ನಿರೂಪಿಸಿದರು.

ಅಂಕಲ ಗುಡಿಕ್ಷೇತ್ರ ಗ್ರಾಮದ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕರಾದ ಎಸ್. ಬಿ ನಾಯಿಕ ವಂದಿಸಿದರು.

ವರದಿ: ಎ.ವೈ.ಸೋನ್ಯಾಗೋಳ

ಸುದ್ದಿ ಹಾಗೂ ಜಾಹಿರಾತುಗಳಿಗಾಗಿ ಸಂಪರ್ಕಿಸಿ

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";