Live Stream

[ytplayer id=’22727′]

| Latest Version 8.0.1 |

Local NewsState News

BREAKING : ನರ್ಸಿಂಗ್ ಓದುತ್ತಿದ್ದ ಬೆಳಗಾವಿಯ ಯುವತಿ ಕಿಡ್ನಾಪ್ ಪ್ರಕರಣಕ್ಕೆ ಸಿಕ್ಕಿದೆ ಬಿಗ್ ಟ್ವಿಸ್ಟ್…!

BREAKING : ನರ್ಸಿಂಗ್ ಓದುತ್ತಿದ್ದ ಬೆಳಗಾವಿಯ ಯುವತಿ ಕಿಡ್ನಾಪ್ ಪ್ರಕರಣಕ್ಕೆ ಸಿಕ್ಕಿದೆ ಬಿಗ್ ಟ್ವಿಸ್ಟ್…!

 

ಬೆಳಗಾವಿ: ತಾಲೂಕಿನ ಸಂತಿಬಸ್ತವಾಡ ಗ್ರಾಮದ ನರ್ಸಿಂಗ್ ಓದುತ್ತಿದ್ದ ಯುವತಿಯನ್ನು ಕಿಡ್ನಾಪ್ ಮಾಡಿದ ಆರೋಪ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ನಾವಿಬ್ಬರು ಪ್ರೀತಿಸುತ್ತಿದ್ದು, ಸ್ವ-ಇಚ್ಛೆಯಿಂದ ಇಬ್ಬರು ಓಡಿ ಹೋಗಿದ್ದೇವೆ ಎಂದು ಯುವಕ-ಯುವತಿ ಹೇಳಿದ್ದಾರೆ.

ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದು, ನಾನು ಯುವತಿಯನ್ನು ಕಿಡ್ನಾಪ್ ಮಾಡಿರಲಿಲ್ಲ, ಇಬ್ಬರು ಪರಸ್ಪರ ಒಪ್ಪಿ ಓಡಿ ಹೋಗಿದ್ದೇವೆ ಎಂದು ಯುವಕ ಸದ್ರುದ್ದೀನ್ ಹೇಳಿದ್ದಾನೆ.

ಬಸ್ತವಾಡ ಗ್ರಾಮದ ರಾಧಿಕಾ ಮುಚ್ಚಂಡಿ ಎಂಬ ಯುವತಿಯನ್ನು ಅನ್ಯಕೋಮಿನ ಯುವಕ ಸದ್ರುದ್ದೀನ್ ಕಿಡ್ನಾಪ್ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು, ಗಾರೆ ಕೆಲಸ ಮಾಡ್ತಿದ್ದ ಸದ್ರುದಿನ್ ಬೇಪಾರಿ ಎಂಬಾತನ ವಿರುದ್ಧ ಯುವತಿ ಕುಟುಂಬದವರು ಅಪಹರಣದ ಆರೋಪ ಹೊರಿಸಿದ್ದರು. 19 ದಿನಗಳ ಹಿಂದೆ ಹಿಂದೂ ಹುಡುಗಿಯನ್ನ ಸದ್ರುದಿನ್ ಎಂಬಾತ ಅಪಹರಿಸಿ ಕರೆದೊಯ್ದಿದ್ದಾನೆ ಎನ್ನಲಾಗಿದೆ.

ಆದರೆ ಇದೀಗ,ಇಬ್ಬರು ಪರಸ್ಪರ ಒಪ್ಪಿ ಓಡಿ ಹೋಗಿದ್ದೇವೆ ಎಂದು ಯುವಕ ಸದ್ರುದ್ದೀನ್ ಹೇಳಿದ್ದಾನೆ. ಇನ್ನು ಈ ತನಿಖೆ ಯಾವು ತಿರುವು ಪಡೆಯುತ್ತದೆ ಕಾದು ನೋಡಬೇಕಾಗಿದೆ.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";