ಹುಣಸೂರು: ತಾಲ್ಲೂಕಿನ ಹನಗೋಡು ಹೋಬಳಿಯ ಮುದುಗನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇದೇ ಆಗಸ್ಟ್ 7, 2025 (ಗುರುವಾರ) ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
ಈ ಶಿಬಿರವನ್ನು ಏಕಲ್ ಅಭಿಯಾನ್ ಕರ್ನಾಟಕ, ವನವಾಸಿ ಕಲ್ಯಾಣ ಕರ್ನಾಟಕ (ಮೈಸೂರು ಅಂಚಲ್), ಹಾಗೂ ಮಣಿಪಾಲ್ ಆಸ್ಪತ್ರೆಯ ಸಹಯೋಗದೊಂದಿಗೆ ಆಯೋಜಿಸಲಾಗಿದ್ದು, ಈ ಅವಕಾಶವನ್ನು ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ನಾಗರಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.
ಶಿಬಿರದಲ್ಲಿ ದೊರೆಯುವ ಉಚಿತ ಸೌಲಭ್ಯಗಳು:
- ಬಿ.ಪಿ. ಮತ್ತು ಶುಗರ್ ಪರೀಕ್ಷೆ
- ಇ.ಸಿ.ಜಿ. ಹಾಗೂ ಹೃದಯ ಸಂಬಂಧಿ ತಪಾಸಣೆ ತಜ್ಞ ವೈದ್ಯರಿಂದ
- ಮಹಿಳೆಯರು ಮತ್ತು ಮಕ್ಕಳಿಗೆ ವಿಶೇಷ ತಪಾಸಣೆ
- ಚರ್ಮ ರೋಗ ತಜ್ಞರಿಂದ ತಪಾಸಣೆ
- ಸಂಬಂಧಿತ ಕಾಯಿಲೆಗಳಿಗಾಗಿ ಉಚಿತ ಔಷಧಿ ಮತ್ತು ಮಾತ್ರೆಗಳು
ಅನ್ವಯ ಸಂಪರ್ಕಿಸಲು:
- ವೈಕುಂಠೇಗೌಡ, ಮೈಸೂರು ಅಂಚಲ್ ಅಧ್ಯಕ್ಷ – 98444 38363
- ಕುಂಟೇಗೌಡ, ಮೈಸೂರು ಅಂಚಲ್ ಉಪಾಧ್ಯಕ್ಷ – 98444 38363
- ಗಣಪತಿ, ಸಂಚ್ ಸಮಿತಿ ಅಧ್ಯಕ್ಷ – 98801 82104
- ಮಣಿಕಂಠ ಜಿ.ಎಸ್., ಕಾರ್ಯದರ್ಶಿ – 73490 51126
- ಸತೀಶ್, ಸಂಭಾಗ್ ಪ್ರಭಾರಿ – 78928 62157
- ಶಂಕರ್, ಅಂಚಲ್ ಅಭಿಯಾನ್ ಪ್ರಮುಖ – 98444 10710
- ಶ್ರೀಮತಿ ಗೀತಾ ಬಿ.ಎನ್., ಮುಖ್ಯ ಶಿಕ್ಷಕಿ, ಮುದುಗನೂರು – 83173 93954
ಗ್ರಾಮಸ್ಥರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಈ ಶಿಬಿರ ಬಹುಮುಖ್ಯವಾಗಿದೆ. ಹೆಚ್ಚಿನವರು ಪಾಲ್ಗೊಂಡು ಪ್ರಯೋಜನ ಪಡೆಯುವುದು ಒಳಿತು.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143