ಹುಕ್ಕೇರಿ: ತಾಲೂಕಿನ ಶಹಾಬಂದರ ಗ್ರಾಮದ ಯುವಕರು ರಸ್ತೆ ಮಧ್ಯದಲ್ಲಿ ಲಾಂಗ್ ಹಿಡಿದು ಶಹಾಬಂದರ ಗ್ರಾಮದ ಕ್ರಾಸ್ ವಾಲ್ಮೀಕಿ ಕ್ರಾಸ್ ಹತ್ತಿರ ಸಾರ್ವಜನಿಕ ರಸ್ತೆ ಮೇಲೆ ನಿಂತು ಅಟ್ಟಹಾಸ ಮೆರೆದಿದ್ದಾರೆ.
ಹಾಲಪ್ಪ ದ್ಯಾಮಪ್ಪ ಕಾಟಾಬಳಿ (25) ಹಾಗೂ ನಾಗರಾಜ ದ್ಯಾಮಣ್ಣಾ ಕಾಟಾಬಳಿ (21) ಎಂಬ ಇಬ್ಬರು ಯುವಕರು ಹೋಗು ಬರುವ ಜನರಿಗೆ ನಮ್ಮ ಹತ್ತಿರ ತಲ್ವಾರ ಲಾಂಗ್ ಇದೆ. ಯಾರಾದರು ನಮ್ಮ ಉಸಾಬರಿಗೆ ಮಾಡಿದರೆ ಅವರನ್ನ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.
ರಸ್ತೆಯ ಮೇಲೆ ಲಾಂಗ್ ಹಿಡಿದು ಚಿರಾಡುವುದು, ಹೋಗು ಬರುವ ಜನರಿಗೆ ಬಾಯಿಗೆ ಬಂದಂತೆ ಅವ್ಯಾಚ್ಯ ಶಬ್ದಗಳಿಂದ ಬೈಯುವುದನ್ನ ಮಾಡಿರುವ ಯುವಕರು. ಸಾರ್ವಜನಿಕರು ತಿಳಿ ಹೇಳಿದರು ಕೇಳದ ಹಾಲಪ್ಪ ಹಾಗೂ ನಾಗರಾಜ ಹೇಳಿದಂತ ಸಾರ್ವಜನಿಕರಿಗೆ ಅವಾಚ್ಯ ಶಬ್ದ ಹಾಗೂ ಏರು ಧ್ವನಿಯಲ್ಲಿ ಮತ್ತು ಉಲ್ಟಾ ಪಲ್ಟಾ ಮಾತನಾಡಿದ್ದಾರೆ. ಸದ್ಯ ಹುಕ್ಕೇರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಯಾವ ರೀತಿಯ ಕ್ರಮ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕಿದೆ.