Live Stream

[ytplayer id=’22727′]

| Latest Version 8.0.1 |

Local News

ಘಟಪ್ರಭಾ ನದಿಯ ಬ್ರಿಜ್-ಕಮ್-ಬ್ಯಾರೇಜ್‌ಗಳನ್ನು ಪರಿಶೀಲಿಸಿದ ಕಂದಾಯ ನಿರೀಕ್ಷಕರು

ಘಟಪ್ರಭಾ ನದಿಯ ಬ್ರಿಜ್-ಕಮ್-ಬ್ಯಾರೇಜ್‌ಗಳನ್ನು ಪರಿಶೀಲಿಸಿದ ಕಂದಾಯ ನಿರೀಕ್ಷಕರು

ಯಮಕನಮರಡಿ: ಕಳೆದ ಮೂರು ದಿನಗಳಿಂದ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಸುರಿದ ಭಾರಿ ಮಳೆಯಿಂದ ಘಟಪ್ರಭಾ ನದಿಗೆ ಒಳ ಹರಿವು ಹೆಚ್ಚಾಗಿದ್ದು, ಬೆಳ್ಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ದಡ್ಡಿ, ಸಲಾಮವಾಡಿ, ಶೆಟ್ಟಿಹಳ್ಳಿ ಗ್ರಾಮಗಳನ್ನು ಮರಣಹೋಳ ಗ್ರಾಮಕ್ಕೆ ಸಂಪರ್ಕ ಮಾಡುವ ಘಟಪ್ರಭಾ ನದಿಯ ಬ್ರಿಜ್-ಕಮ್-ಬ್ಯಾರೇಜ್‌ಗಳ ಮೇಲೂ ನೀರಿನ ಹರಿವು ಕಂಡುಬಂದಿದೆ.

ಈ ಹಿನ್ನೆಲೆ ಯಮಕನಮರಡಿ ತಾಲ್ಲೂಕಿನ ಕಂದಾಯ ನಿರೀಕ್ಷಕರು ಸಿ.ಕೆ. ಕಲಕಾಂಬಕರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಗ್ರಾಮ ಸಹಾಯಕರ ಸಹಯೋಗದಿಂದ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವ ಉದ್ದೇಶದಿಂದ ಬ್ರಿಜ್ ಪ್ರದೇಶದಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗಿದೆ.

ಪರಿಶೀಲನೆ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ಇತ್ತೀಚೆಗೆ ಮಳೆಯ ಪ್ರಮಾಣ ಕಡಿಮೆಯಾದ ಕಾರಣ ಘಟಪ್ರಭಾ ನದಿಗೆ ನಿರ್ಮಿಸಿದ ಮೂರು ಬ್ರಿಜ್‌ಗಳ ಮೇಲಿನ ನೀರಿನ ಮಟ್ಟ ಕುಸಿದಿದ್ದು, ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದೆ. ಆದರೆ, ಮೋದಗಾ ಗ್ರಾಮದ ಬ್ರಿಜ್‌ ಮೇಲೆ ಮಾತ್ರ ಇನ್ನೂ ನೀರು ಹರಿಯುತ್ತಿರುವುದರಿಂದ ಅಲ್ಲಿ ಸಂಚಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ,” ಎಂದು ತಿಳಿಸಿದರು.

ವರದಿ: ಕಲ್ಲಪ್ಪ ಪಾಮನಾಯಿಕ

ನಮ್ಮೂರ ಧ್ವನಿ ನ್ಯೂಸ್

ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ

+91 9164577143

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";