Live Stream

[ytplayer id=’22727′]

| Latest Version 8.0.1 |

Local News

ಕರಗುಪ್ಪಿಯಲ್ಲಿ ಶಿವಲಿಂಗಕ್ಕೆ ಪ್ರಾಣಪ್ರತಿಷ್ಠಾಪಣ ಕಾರ್ಯಕ್ರಮ

ಕರಗುಪ್ಪಿಯಲ್ಲಿ ಶಿವಲಿಂಗಕ್ಕೆ ಪ್ರಾಣಪ್ರತಿಷ್ಠಾಪಣ ಕಾರ್ಯಕ್ರಮ


ಹುಕ್ಕೇರಿ: ತಾಲೂಕಿನ ಕರಗುಪ್ಪಿ ಗ್ರಾಮದಲ್ಲಿ ನಿರ್ಮಾಣವಾಗಿರುವ ಶ್ರೀ ಈಶ್ವರ ಲಿಂಗೇಶ್ವರ ನೂತನ ಕಟ್ಟಡದಲ್ಲಿ ಇಂದು ಶಿವಲಿಂಗವನ್ನು ಸ್ಥಾಪಿಸಿ ಅದಕ್ಕೆ ಪ್ರಾಣಪ್ರತಿಷ್ಠಾಸಲಾಯಿತು. ಕಳೆದ ಮೂರು ದಿನಗಳಿಂದ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ಜರಗುತ್ತಿದ್ದು ನಿನ್ನೆ 25-03-2025ರಂದು ಸಾಯಂಕಾಲ 5:00 ಕ್ಕೆ ಶ್ರೀ ಸೀಮಿದೇವಿ ದೇವಸ್ಥಾನದಿಂದ ಕುಂಭ ಮೇಳವನ್ನು ಪ್ರಾರಂಭಿಸಿ ಊರಿನ ಬೀದಿಗಳಲ್ಲಿ ಸಾಗುತ್ತ ಶಿವಲಿಂಗೇಶ್ವರ ದೇವಸ್ಥಾನದಲ್ಲಿ ಮುಕ್ತಾಯ ಮಾಡಲಾಯಿತು.

ಇಂದು ಬೆಳಗ್ಗೆ 6:00 ಗಂಟೆಯಿಂದ ಶಿವಲಿಂಗಕ್ಕೆ ಪ್ರಾಣಪ್ರತಿಷ್ಟಾಪನೆ ಮತ್ತು ಕಳಸಾರೋಹನ ಕಾರ್ಯವನ್ನು ಪ್ರಾರಂಭವಾಯಿತು. ಮತ್ತು ಊರಿನ ಎಲ್ಲಾ ಗಣ್ಯರು ಹಾಗೂ ಎಲ್ಲಾ ಪ್ರಜೆಗಳು ಸೇರಿ ಕಾರ್ಯವನ್ನು ಬಹಳ ವಿಜೃಂಭಣೆಯಿಂದ ನೆರವೇರಿಸಿದರು. ಈ ಶುಭ ಕಾರ್ಯವು ಊರಿನ ಎಲ್ಲ ದೇವರ ಪಲ್ಲಕ್ಕಿ ಉಪಸ್ಥಿತಿಯಲ್ಲಿ ನೆರವೆರಿದ್ದು ಬಹಳ ವಿಷೇಶ.

ಈ ಈಶ್ವರನ ದೇವಸ್ಥಾನಕ್ಕೆ ಹಲವಾರು ಭಕ್ತರು ತಮ್ಮ ಕೈಯಿಂದಾದಷ್ಟು ದೇಣಿಗೆ ನೀಡಿದ್ದಾರೆ ಮತ್ತು ಸುತ್ತಲಿನ ಗಣ್ಯಾತಿ ಗಣ್ಯರು ಸಾಕಷ್ಟು ದೇಣಿಗೆ ನೀಡಿದ್ದಾರೆ.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";