ಹುಕ್ಕೇರಿ: ತಾಲ್ಲೂಕಿನ ನರಸಿಂಗಪುರ ಗ್ರಾಮದ ಕು. ಸಮೀಕ್ಷಾ ಬಸವರಾಜ ಹುದಲಿ ಅವರು ಹಾಸನ ಜಿಲ್ಲೆಯ ಅರಸಿಕೇರಿಯಲ್ಲಿ ಇರುವ ಶ್ರೀ ಚಂದ್ರಶೇಖರ ಭಾರತಿ ಇಂಟರ್ನ್ಯಾಷನಲ್ ಶಾಲೆಯ ಇಂಗ್ಲಿಷ್ ಮಾಧ್ಯಮದಲ್ಲಿ SSLC ಪರೀಕ್ಷೆಯಲ್ಲಿ 92% ಅಂಕಗಳೊಂದಿಗೆ ಉತ್ತೀರ್ಣ ಆಗಿ ಗೌರವನೀಯ ಸಾಧನೆ ಮಾಡಿದ್ದಾರೆ.
ಶಾಲಾ ಅಧ್ಯಾಪಕರು, ಸಹಪಾಠಿಗಳು ಹಾಗೂ ಗ್ರಾಮದ ಗುರು ಹಿರಿಯರು ಸಮೀಕ್ಷಾ ಅವರ ಈ ಸಾಧನೆಯನ್ನು ಶ್ಲಾಘಿಸಿ, ಮುಂದಿನ ವಿದ್ಯಾಭ್ಯಾಸಕ್ಕೂ ಶುಭ ಹಾರೈಸಿದ್ದಾರೆ.
ಕು. ಸಮೀಕ್ಷಾ ಬಸವರಾಜ ಹುದಲಿಗೆ ನಮ್ಮೂರ ಧ್ವನಿ ಸುದ್ದಿ ವಾಹಿನಿಯ ಕಡೆಯಿಂದ ಹೃತ್ಪೂರ್ವಕ ಅಭಿನಂದನೆಗಳು🌟✨💐.