ಅಥಣಿ: ತಾಲೂಕಿನ ಸಂಬರಗಿ ಗ್ರಾಮದ ಅಜಯಕುಮಾರ ಯಶವಂತ ದೇವಮಾನೆ(55), ಇವರು ಕಳೆದ 33 ವರ್ಷಗಳಿಂದ ಸರ್ಕಾರಿ ಶಿಕ್ಷಕರಾಗಿ ಸೇವೆಸಲ್ಲಿಸುತ್ತಿದ್ದರು. ಅನಾರೋಗ್ಯ ಹಿನ್ನಲೆ ಮಹಾರಾಷ್ಟ್ರದ ಸಾಂಗ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ, ಬುಧವಾರ ಸಾಯಂಕಾಲ ಸವಣ್ಣಪ್ಪಿರುವ ಘಟನೆ ಜರುಗಿದೆ.
ಕಳೆದ ಎಂಟು ದಿನಗಳ ಹಿಂದೆ ಎದೆ ನೋವು ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಸಾಂಗ್ಲಿ ಖಾಸಗಿ ಆಸ್ಪತ್ರೆಗೆ ಅವರನ್ನ ದಾಖಲಿಸಲಾಗಿತ್ತು, ಚಿಕಿತ್ಸೆಗೆ ಸ್ಪಂದಿಸದೆ ಇಂದು ಸಾಯಂಕಾಲ ಕೊನೆಯುಸಿರಿಳೆದಿದ್ದಾರೆ. ಮೂವರು ಮಕ್ಕಳು ಮಡದಿ, ಅಪಾರ ಬಂಧು-ಬಳಗ ಅಗಲಿದ್ದಾರೆ.